Web Stories
Desha Dootha
ePaper
| LIVE |ಅಂತಾರಾಷ್ಟ್ರೀಯ|ರಾಷ್ಟ್ರೀಯ|ರಾಜ್ಯ |ಕಲ್ಯಾಣ ಕರ್ನಾಟಕ|ಕೊಪ್ಪಳ|ಯಲಬುರ್ಗಾ|ಕುಕನೂರು|ಕುಷ್ಟಗಿ|ಗಂಗಾವತಿ |ಕಾರಟಗಿ |ಕನಕಗಿರಿ| ಕೊಪ್ಪಳ ಸ್ಥಳೀಯ|ಸುತ್ತ-ಮುತ್ತ|Feature|ಪಾಲಿಟಿಕ್ಸ್|ಕ್ಷೇತ್ರವಾರು |
| LIVE |ಅಂತಾರಾಷ್ಟ್ರೀಯ|ರಾಷ್ಟ್ರೀಯ|ರಾಜ್ಯ |ಕಲ್ಯಾಣ ಕರ್ನಾಟಕ|ಕೊಪ್ಪಳ
ಯಲಬುರ್ಗಾಕುಕನೂರುಕುಷ್ಟಗಿಗಂಗಾವತಿ ಕಾರಟಗಿ ಕನಕಗಿರಿ ಕೊಪ್ಪಳ ಸ್ಥಳೀಯಸುತ್ತ-ಮುತ್ತFeatureಪಾಲಿಟಿಕ್ಸ್ಕ್ಷೇತ್ರವಾರುಲೇಖನ

ಶಾಸಕ ರಾಯರೆಡ್ಡಿ ಹೆಸರಿಗೆ ಮಸಿ ಬಳಿಯುತ್ತಿರುವ ಹಂಪಯ್ಯಸ್ವಾಮಿ

ಡಿ.ಡಿ. ನ್ಯೂಸ್ : ಯಲಬುರ್ಗಾ

Advertisement

ರೈತರಿಗೆ ಅವಾಜ್ ಹಾಕಿದ ರಾಯರೆಡ್ಡಿ ಆಪ್ತ 

ರೈತರ ಮೇಲೆ ದರ್ಪ ತೋರುತ್ತಿರುವ ಕೆಎಮ್ಎಫ್ ನಾಮ ನಿರ್ದೇಶಕ

ಯಲಬುರ್ಗಾ: ತಾಲೂಕಿನ ಚಿಕ್ಕಮ್ಯಾಗೇರಿ-ಮುರಡಿ ಗ್ರಾಮಗಳ ಗ್ರಾಮೀಣ ಒಳ ರಸ್ತೆ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ರೈತರಿಗೆ ಏಕ‌ ವಚನದಲ್ಲಿ ಶಾಸಕ ಬಸವರಾಜ ರಾಯರೆಡ್ಡಿ ಆಪ್ತ ಕೆಎಮ್‌ಎಫ್ ನಾಮ ನಿರ್ದೇಶಕ ಹಂಪಯ್ಯ ಸ್ವಾಮಿ ಹಿರೇಮಠ ಅವಾಜ್ ಹಾಕಿದ ಘಟನೆ ಸೋಮವಾರ‌ ನಡೆದಿದೆ.news_1781069612_0_720.webpಕಳೆದ ಐದಾರು ತಿಂಗಳಿನಿಂದ ಮುರಡಿಯಿಂದ ಚಿಕ್ಕಮ್ಯಾಗೇರಿ ಗ್ರಾಮದ ವರೆಗೆ ಸಂಪರ್ಕ ಕಲ್ಪಿಸುವ ಒಳ ಗ್ರಾಮೀಣ ರಸ್ತೆಯ ಕಾಮಗಾರಿಯನ್ನು ಪಂಚಾಯತ್ ರಾಜ್‌ ಇಂಜನಿಯರ್ ಉಪ ವಿಭಾಗದಿಂದ ಕೈಗೆತ್ತಿಗೊಳ್ಳಲಾಗಿದೆ. ಮುರಡಿ ಗ್ರಾಮದಿಂದ ಈಗಾಗಲೇ 31 ಅಡಿಗೆ ರಸ್ತೆಯನ್ನು ಅಗಲೀಕರಣ ಮಾಡಿಕೊಂಡು ಬಂದು ಅರ್ಥ ವರ್ಕ್ ಮಾಡಲಾಗಿದೆ. ಆದರೆ, ಚಿಕ್ಕಮ್ಯಾಗೇರಿ ಗ್ರಾಮದ ಸೀಮಾಂತರದಲ್ಲಿನ ಚಂಡೂರು,ಕುರಿ, ಬಾದ್ರಿ, ದಮ್ಮೂರು ಇವರ ಜಮೀನಿನ ಹತ್ತಿರ ರಸ್ತೆಯನ್ನು ಅಗಲೀಕರಣ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಹಾಗೂ ರೈತರ ಮಧ್ಯ ವಾಗ್ವಾದ ನಡೆಯುತ್ತಿತ್ತು. ಆದರೆ, ಏಕಾಏಕಿ ಆಗಮಿಸಿದ ಕಾಂಗ್ರೆಸ್ ಮುಖಂಡ ಹಾಗೂ ರಾಯರೆಡ್ಡಿ ಆಪ್ತ ಕೆಎಮ್ಎಫ್ ನಾಮ ನಿರ್ದೇಶಕ ಹಂಪಯ್ಯಸ್ವಾಮಿ ಹಿರೇಮಠ ಅವರು ಯಾರೇ ವಿರೋಧ ಮಾಡಿದ್ರೂ ಸಹ ಅವರಿಗೆ ತಕ್ಕ ಶಾಸ್ತಿ ಮಾಡಿಸೋಣ, ಯಾವನರ್ ಏನರ್ ಅಂದ್ರ ನನಗ ಹೇಳು ಎಂದು ಏಕವಚನದಲ್ಲಿ ರೈತರಿಗೆ ಅವಾಜ್ ಹಾಕಿದ ಕೈ-ಕೈ ಮೀಲಾಯಿಸಿದ ಪ್ರಸಂಗ ಜರುಗಿತು. 

ಇದಕ್ಕೆ ರೈತರು ತೀವ್ರ ವಿರೋಧ ವ್ಯಕ್ತ ಪಡಿಸಿ, ನೀವು ಒಬ್ಬರೇ‌ ಕಾಂಗ್ರೆಸ್ ನವರಲ್ಲ. ನಾವು ಸಹ ಕಾಂಗ್ರೆಸ್ ನವರೇ ನಮ್ಮ ಅಪ್ಪನ ಕಾಲದಿಂದಲೂ ಕಾಂಗ್ರೆಸ್ ಪಕ್ಷದಲ್ಲಿದ್ದೇವೆ. ನಿನ್ನೆ-ಮೊನ್ನೆ ಬಂದು ನಮ್ಮ ಮೇಲೆ ದಬ್ಬಾಳಿಕೆ‌ ಮಾಡೋದು ಎಷ್ಟು ಸರಿ. ನಾವು ರಾಯರೆಡ್ಡಿಗೆ ಮಾತನಾಡುತ್ತೇವೆ ಎಂದು ಸ್ಥಳದಲ್ಲಿಯೇ ರಾಯರೆಡ್ಡಿಗೆ ದೂರು ವಾಣಿ‌ ಕರೆ‌ ಮಾಡಿದ್ರು ರಾಯರೆಡ್ಡಿ ಕರೆ‌ ಸ್ವೀಕರಿಸಲಿಲ್ಲವೆಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. news_1781069622_0_433.webpತಕ್ಕ ಪಾಠ‌: ನಮ್ಮ ಜಮೀನುಗಳಿಗೆ ರಸ್ತೆ ನಿರ್ಮಾಣ ಮಾಡಿಕೊಡುವಂತೆ ರಾಯರೆಡ್ಡಿ ಯವರಿಗೆ ಹಲವು ಬಾರಿ‌ ಮನವಿ ಮಾಡಿದ್ದೇವು. ಆದರೆ, ಇತ್ತೀಚಿಗೆ ಅನುದಾನ ಕೊಡಿಸುವ ಮೂಲಕ ರಸ್ತೆ ನಿರ್ಮಾಣ ಮಾಡುತ್ತಿರುವುದಕ್ಕೆ ಸಂತಸ ತಂದಿತ್ತು. ಆದರೆ, ನಿನ್ನೆ-ಮೊನ್ನೆ ಅಷ್ಟೇ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡ ಹಂಪಯ್ಯಸ್ವಾಮಿ ಹಿರೇಮಠಗೆ ಹಾಲು ಉತ್ಪಾದಕ ಸಹಕಾರ ಸಂಘದ ನಾಮ ನಿರ್ದೇಶಕ ಸರ್ಕಾರಿ ಪದವಿ ಪೂರ್ವ ಕಾಲೇಜು ಸಿಡಿಸಿ ಉಪಾಧ್ಯಕ್ಷ ಹಾಗೂ ಕೆಎಮ್‌ಎಫ್ ನಾಮ ನಿರ್ದೇಶಕ ಹುದ್ದೆಯನ್ನು ನೀಡುವ ಮೂಲಕ ರಾಯರೆಡ್ಡಿ ಮೂಲ ಕಾಂಗ್ರೆಸ್ಸಿಗರಿಗೆ ಅನ್ಯಾಯ ಮಾಡುತ್ತಿದ್ದಾರೆ. ಇಂತವರನ್ನು ಬೆಳೆಸುವ ಮೂಲಕ ನಮಗೆ ಅನ್ಯಾಯ ಮಾಡಲು ಮುಂದಾದ ರಾಯರೆಡ್ಡಿಗೆ‌‌ ಮುಂದಿನ ದಿನ ಮಾನಗಳಲ್ಲಿ ತಕ್ಕ ಪಾಠ‌ ಕಲಿಸುವುದಾಗಿ ಗ್ರಾಮದ ನಿಂಗಪ್ಪ ಕುರಿ, ಬಸಪ್ಪ ದಮ್ಮೂರ, ಯಮನರಪ್ಪ ಕುರಿ, ಶರಣಪ್ಪ ಬಾದ್ರಿ, ರಮೇಶ‌ ದಮ್ಮೂರ, ಕಳಕಪ್ಪ ಬಾದ್ರಿ, ರಾಜೇಸಾಬ ಜಾತಿಗೇರ, ಬಸವರಾಜ ಮೆಳ್ಳಿಕೇರಿ ಇತರರು ಎಚ್ಚರಿಸಿದರು.

ರಾಯರೆಡ್ಡಿ ಬೆಂಬಲಿಗ ಹಾಗೂ ಕೆಎಮ್ಎಫ್ ನಾಮನಿರ್ದೇಶಕ ಹಂಪಯ್ಯಸ್ವಾಮಿ ಹಿರೇಮಠ ಅವರು ರಸ್ತೆ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ರೈತ-ರೈತರ ಮಧ್ಯ ಜಗಳವನ್ನು ತಂದಿಟ್ಟು ಮೋಜು ನೋಡುತ್ತಿದ್ದಾರೆ. ಗ್ರಾಮೀಣ ರಸ್ತೆ ನಿರ್ಮಾಣ ಕ್ಕೂ ಹಂಪಯ್ಯಸ್ವಾಮಿ ಗೂ ಯಾವುದೇ ಸಂಬಂಧವಿಲ್ಲ. ಅಥವಾ ಅವರ ಜಮೀನು ಸಹ ಈ ರಸ್ತೆಯಲ್ಲಿ ಇಲ್ಲ. ಆದರೂ ಸಹ ಅಧಿಕಾರಿಗಳು ಸಮಸ್ಯೆ ಇತ್ಯರ್ಥಕ್ಕೆ ಆಗಮಿಸಿದ ಸಂದರ್ಭದಲ್ಲಿ ತಾವು ಏಕಾಏಕಿ ಮೂಗು ತೂರಿಸಿ ಬರುತ್ತಿರುವುದರ‌ ಹಿಂದೇ ಏನೋ ಮರ್ಮವಿದೆ. ಹಂಪಯ್ಯಸ್ವಾಮಿ ಶಾಸಕ ಬಸವರಾಜ ರಾಯರೆಡ್ಡಿ ಹೆಸರು ಹೇಳಿಕೊಂಡು ಅಧಿಕಾರಿ ಮತ್ತು ಗುತ್ತಿಗೆದಾರರನ್ನು ಕೈಗೆ ತೆಗೆದುಕೊಂಡು ರೈತರ ಮೇಲೆ ವಿನಾಃಕಾರಣ ತೊಂದರೆ‌ ಕೊಡುತ್ತಿದ್ದಾನೆ. ಮೂರು ಮೂರು ಹುದ್ದೆಯನ್ನು ನೀಡಿದ ರಾಯರೆಡ್ಡಿ ಹಂಪಯ್ಯಸ್ವಾಮಿ ಗೆ ಬ್ರೇಕ್ ಹಾಕಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.

Author
Desha Dootha
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪತ್ರಿಕಾ ದಿನಾಚರಣೆ, ಜಿಲ್ಲಾ ಪತ್ರಕರ್ತರ ಸಮಾವೇಶದ ಭಿತ್ತಿಪತ್ರ ಬಿಡುಗಡೆಪ್ರಕಾಶ್ ಹಳ್ಳಿಗುಡಿ ಅವರಿಗೆ ಎಚ್ ಡಿ ಪದವಿ: ಹರ್ಷಹಿರೇಮನ್ನಾಪೂರದಲ್ಲಿ ಶನಿವಾರ ಆರಂಭವಾದ ೧೪ನೇ ಕೊಪ್ಪಳ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಲೇಖಕ ಕಿಶನರಾವ್ ಕುಲಕರ್ಣಿ ಸಮಕಾಲಿನ ಸವಾಲುಗಳು ವಿಷಯವಾಗಿ ಮಾತನಾಡಿದರು.ಊರು ಕೊಳ್ಳೆ ಹೊಡೆದ ನಂತರ, ಕೋಟೆ ಬಾಗಿಲು ಹಾಕಿದರೇನಂತೆ?ಹಣಕ್ಕಿಂತ ಜ್ಞಾನ ಸಂಪತ್ತು ಬಹಳ ಮುಖ್ಯ: ಡಾ. ಮಹಾದೇವ ದೇವರುVB-G RAM G ಯೋಜನೆಯ ಅನುಷ್ಠಾನಿಸುವ ಕುರಿತು ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ತರಬೇತಿಶಾಸಕ ಬಸವರಾಜ ರಾಯರಡ್ಡಿ ಬಂದರು ದಾರಿ ಬಿಡಿ ಪ್ಲೀಸ್..!ಯಲಬುರ್ಗಾ ದಲ್ಲಿ ಇಡ್ಲಿ ದೋಸೆ ಸಿಗವಲ್ಲವಂತೆ...!ರಾಯರಡ್ಡಿಯ ಗೌರವವನ್ನು ನಿರಾಕರಿಸಿದ ಸಿಎಂ ಡಿಕೆಶಿಭಾನಾಪುರದಲ್ಲಿ ಭೀಕರ ರಸ್ತೆ ದುರಂತ: ಡಿವೈಡರ್ ದಾಟಿ ಬಂದ ಲಾರಿ ಡಿಕ್ಕಿ, ಮೃತರ ಸಂಖ್ಯೆ ಐದಕ್ಕೆ ಏರಿಕೆ!