ಕಳೆದ ವರ್ಷ ತುಂಗಭದ್ರಾ ಜಲಾಶಯದ 33 ಸ್ಟೀಲ್ ಗೇಟು ಗಳು ಕೊಚ್ಚಿ ಹೋಗಿದ್ದವು. ಒಂದು ವರ್ಷದಲ್ಲಿ ಪುನರ್ ಅಳವಡಿಸಿದ ಬಳಿಕ ಜೂ.25 ರಂದು ಮುನಿರಾಬಾದಿನಲ್ಲಿ ನಡೆದ ಐತಿಹಾಸಿಕ ಕಾರ್ಯಕ್ರಮದಲ್ಲಿ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ದ ಮುಖ್ಯಮಂತ್ರಿ ಗಳು ಒಂದೇ ವೇದಿಕೆಯಲ್ಲಿ ಸಮಾ ಗಮವಾಗುವ ಮೂಲಕ ಐತಿ ಹಾಸಿಕ ಕ್ಷಣಕ್ಕೆ ಸಾಕ್ಷಿ ಯಾದರು. ಮುನಿರಾಬಾದ್ನ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ರಾಜ್ಯ ಸರ್ಕಾರದ ಜಲಸಂಪನ್ಮೂಲೆ ಇಲಾಖೆ ಹಾಗೂ ತುಂಗಭದ್ರಾ ಮಂಡಳಿಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ 'ತುಂಗ ಭದ್ರಾ ಜಲಾಶಯದ 33 ಸ್ಪಿಲ್ವೇ ಗೇಟುಗಳ ಲೋಕಾರ್ಪಣೆ'ಗೊಳಿಸಲು ಸಿಎಂ ಡಿಕೆ ಶಿವಕುಮಾರ ಆಗಮಿಸಿದ್ದರು. ಈ ವೇಳೆ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಸೇರಿದಂತೆ ಇತರೆ ಅಧಿಕಾರಿಗಳು ಹೂಗುಚ್ಛ ನೀಡಿ, ಸಿಎಂ ಅವರನ್ನು ಸ್ವಾಗತಿಸಿದರು. ಬಳಿಕ ಯಲಬುರ್ಗಾ ಕ್ಷೇತ್ರದ ಶಾಸಕ ಬಸವರಾಜ ರಾಯರಡ್ಡಿ ಅವರು ಹಸ್ತ ಲಾಘವ (ಕೈ ಕುಲುಕಿ) ಏಲಕ್ಕಿ ಹಾರವನ್ನು ಹಾಕಲು ಮುಂದಾದರು. ರಾಯರಡ್ಡಿ ಯವರ ಗೌರವವನ್ನು ತಿರಸ್ಕರಿಸಿದಲ್ಲದೇ ರಾಯರಡ್ಡಿ ಯನ್ನು ಮುಂದೆ ಹೋಗುವಂತೆ ಸೂಚಿಸಿರುವುದು ಆಶ್ಚರ್ಯಕ್ಕೆ ಕಾರಣವಾಯಿತು.
ತೆಲಂಗಾಣ ನ ಸಿಎಂ ರೇವಂತ ರೆಡ್ಡಿ ಯನ್ನು ರಾಯರಡ್ಡಿ ಆತ್ಮೀಯ ವಾಗಿ ಸ್ವಾಗತ ಮಾಡಿಕೊಂಡರು. ಆದರೆ, ರಾಜ್ಯದ ಮುಖ್ಯಮಂತ್ರಿ ಡಿಕೆಶಿ ಮಾತ್ರ ರಾಯರಡ್ಡಿ ಗೌರವ ತಿರಸ್ಕರಿಸಿರುವುದು ಅಚ್ಚರಿಗೆ ಕಾರಣವಾಗಿದೆ.
