ಯಲಬುರ್ಗಾ: ಪ್ರತಿಯೊಬ್ಬರು ಯೋಗದ ಮಹತ್ವವನ್ನು ಅರಿತು ಕೊಂಡು ದಿನ ನಿತ್ಯ ಕನಿಷ್ಠ ಅರ್ಧ ಘಂಟೆಯಾದರು ಮಾಡಿದರೆ ಮನ ಸದೃಢ ವಾಗುತ್ತದೆ ಎಂದು ಸ್ಥಳೀಯ ಈಶ್ವರಿ ವಿಶ್ವ ವಿದ್ಯಾಲಯದ ಸಂಚಾಲಕರಾದ ಬ್ರ. ಕು. ಗೀತಕ್ಕ್ ನವರು ಹೇಳಿದರು.
ಪಟ್ಟಣದ ಈಶ್ವರಿ ವಿಶ್ವ ವಿದ್ಯಾಲಯದಲ್ಲಿ ಆಯೋಜಿಸಿದ 12 ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ರವಿವಾರ ಉದ್ಘಾಟಿಸಿ ಮಾತನಾಡಿದ ಅವರು ಎಲ್ಲಾ ಸಂಪತ್ತಿಗಿಂತ ಆರೋಗ್ಯ ಸಂಪತ್ತು ಮಿಗಿಲಾದದ್ದು ಆದ್ದರಿಂದ ಎಲ್ಲರೂ ನಿಯಮಿತ ಆಹಾರ, ವ್ಯಾಯಾಮ ಮಾಡುವದರ ಜೊತೆಗೆ ಯೋಗವನ್ನು ಮಾಡಿದಾಗ ಯಾವುದೇ ರೋಗ ರುಜಿನಗಳು ಬರದಂತೆ ತಡೆಗಟ್ಟಲು ಸಾಧ್ಯವಿದೆ ಎಂದ ಅವರು ಒಳ್ಳೆ ವಿಚಾರ ಕೇಳುವದು ಸಜ್ಜನರ ಸಂಘ ಬಯಸುವದು ಕ್ರಿಯಾಶೀಲಾ ರಾಗುವದು ಸಾರ್ಥಕರ ಲಕ್ಷಣವಾಗಿದೆ ಎಂದರು. ನಮ್ಮ ಈಶ್ವರಿ ವಿಶ್ವ ವಿದ್ಯಾಲಯದಲ್ಲಿ ಪ್ರತಿ ನಿತ್ಯ ನೀತಿ ಬೋಧನೆಯನ್ನ ತಿಳಿಸಿ ಕೊಡಲಾಗುವುದು ಅದರ ಪ್ರಯೋಜನ ವನ್ನು ಪಡೆದುಕೊಂಡು ಉತ್ತಮ ನಾಗರಿಕರಾಗಿ ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಿದೆ.
ಯೋಗದಿಂದ ಯೋಗ್ಯತೆ ಯನ್ನು ಗಳಿಸಬಹುದು ಎಂದರು.
ಶಾರದಾ ಕೊಣ್ಣೂರ, ಕಣವಿ ಅಕ್ಕಾ, ಶ್ರೀಗಿರಿ ಅಕ್ಕಾ, ಯರಾಸಿ ಅಕ್ಕಾ, ಮಲಕಸಮುದ್ರ ಅಕ್ಕಾ, ಹಿರೇಮಠ ಅಕ್ಕಾ, ಹೂಗಾರ ಅಕ್ಕಾ, ಹೊನ್ನೂರು ಅಕ್ಕಾ ಹಾಗೂ ಪರಿವಾರದ ಅನೇಕ ಅಕ್ಕಂದಿರು ಭಾಗವಹಿಸಿ ಭಾಗ್ಯ ವನ್ನು ರೂಪಿಸಿಕೊಂಡರು.
ಶಿಕ್ಷಕಿ ಸುನೀತಾ ಪತಂಗರಾಯ ರವರು ಅಚ್ಚು ಕಟ್ಟಾಗಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
