ಒಬ್ಬಬ್ಬರಿಗೆ ಎರಡೆರಡು ಹುದ್ದೆಗಳು.
ಅಹಿಂದ ನಾಯಕರ ಕಡೆಗಣನೆ.
ಯಲಬುರ್ಗಾ ವಿಧಾನ ಸಭಾ ಕ್ಷೇತ್ರದಲ್ಲಿ ಕೇವಲ 5-6 ಸಾವಿರ ಮತಗಳಿರುವ ಮುಂದುವರೆದ ಸಮಾಜದ ವರಿಗೆ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಮನ್ನಣೆ ನೀಡುತ್ತಿದ್ದಾರೆ.
ವಿಧಾನ ಸಭಾ ಕ್ಷೇತ್ರದಲ್ಲಿ ಬಹು ಸಂಖ್ಯಾತ ಮತಗಳನ್ನು ಹೊಂದಿದ ಸಮಾಜದವರನ್ನು ಕಡೆಗಣಿಸಿ ಮುಂದುವರೆದ ಬ್ರಾಹ್ಮಣ ಹಾಗೂ ಲಿಂಗಾಯತ (ಜಂಗಮ) ಸಮಾಜದವರಿಗೆ ಓರ್ವರಿಗೆ ಎರಡೇರಡು ಹುದ್ದೆ ನೀಡುವ ಮೂಲಕ ಪಂಚಮಸಾಲಿ, ಕುರುಬ, ಗಾಣಿಗ, ಅಲ್ಪಸಂಖ್ಯಾತ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇನ್ನಿತರ ಸಮಾಜದ ವರನ್ನು ರಾಯರೆಡ್ಡಿ ಕ್ಯಾರೆ ಎನ್ನದೇ ತಮ್ಮನ್ನು ಕಡೆಗಣಿಸಿದ್ದಾರೆಂಬ ಮಾತುಗಳು ಕಾಂಗ್ರೆಸ್ ಹಿರಿಯ ಕಾರ್ಯಕರ್ತರಿಂದ ಕೇಳಿ ಬರುತ್ತಿವೆ.
ಓರ್ವರಿಗೇಕೆ ಎರಡೆರಡು ಹುದ್ದೆಗಳು.
ಕಳೆದ ಎರಡ್ಮೂರು ದಶಕಗಳಿಂದ ರಾಯರೆಡ್ಡಿ ಯವರ ಜೊತೆಗೆ ಗುರುತಿಸಿಕೊಂಡು ರಾಯರೆಡ್ಡಿಯವರ ಗೆಲುವಿಗೆ ಸತತ ಪ್ರಯತ್ನದಲ್ಲಿರುವ ಪಂಚಮ ಸಾಲಿ, ಕುರುಬ, ಗಾಣಿಗ, ಅಲ್ಪಸಂಖ್ಯಾತ ಸೇರಿದಂತೆ ಇನ್ನಿತರ ಸಮಾಜದ ಮುಖಂಡರನ್ನು ಕಡೆಗಣಿಸಿದ ರಾಯ ರೆಡ್ಡಿ ಅವರು ಇತ್ತೀಚೆಗಷ್ಟೇ ಗುರುತಿಸಿಕೊಂಡ ಬ್ರಾಹ್ಮಣ ಸಮಾಜದ ಸುಧೀರ ಕೊರ್ಲಳ್ಳಿ ಯವರಿಗೆ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಹಾಗೂ ಯಲಬುರ್ಗಾ ಪಟ್ಟಣದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಿಡಿಸಿ(ಕಾಲೇಜು ಅಭಿವೃದ್ಧಿ ಸಮಿತಿ) ಉಪಾಧ್ಯಕ್ಷ (ಅಧ್ಯಕ್ಷ) ಸ್ಥಾನ ವನ್ನು ನೀಡಿದ್ದಾರೆ.
ಇನ್ನೂ ಕಾಂಗ್ರೆಸ್ ವಲಯದಲ್ಲಿ ಇತ್ತೀಚೆಗಷ್ಟೇ ಗುರುತಿಸಿಕೊಂಡ ಚಿಕ್ಕಮ್ಯಾಗೇರಿ ಗ್ರಾಮದ ಹಂಪಯ್ಯಸ್ವಾಮಿ ಹಿರೇಮಠ ಗೆ ಕೆಎಂಎಫ್ ನಾಮ ನಿರ್ದೇಶಕರಾಗಿ ಮತ್ತು ಚಿಕ್ಕಮ್ಯಾಗೇರಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಿಡಿಸಿ(ಕಾಲೇಜು ಅಭಿವೃದ್ಧಿ ಸಮಿತಿ) ಉಪಾಧ್ಯಕ್ಷ (ಅಧ್ಯಕ್ಷ) ಸ್ಥಾನವನ್ನು ನೀಡಿರುವುದು ಮತ್ತು ಬ್ರಾಹ್ಮಣ ಸಮಾಜದ ಅಪ್ಪಣ್ಣ ಜೋಶಿಗೆ ರಾಯಲ್ ಯೂಥ್ ಅಧ್ಯಕ್ಷ ಸ್ಥಾನ ನೀಡಿರುವುದು ಹಿರಿಯ ಕಾರ್ಯಕರ್ತರ, ಯುವ ಕಾಂಗ್ರೆಸಿಗರ ಅಸಮಾಧಾನಕ್ಕೆ ಕಾರಣವಾಗಿದೆ. 
ಲಾಭದಾಯಕ ಹುದ್ದೆಗಳು ಅಹಿಂದ ವರ್ಗಕ್ಕಿಲ್ಲ ಏಕೆ.?
ಪ್ರತಿ ಚುನಾವಣೆಯಲ್ಲಿ ಅಹಿಂದ ನಾಯಕ ಸಿಎಂ ಸಿದ್ದರಾಮಯ್ಯ ಅವರ ಹೆಸರು ಹೇಳಿಕೊಂಡು ಅಹಿಂದ ಮತ ಪಡೆಯುವ ಬಸವರಾಜ ರಾಯರೆಡ್ಡಿ ಮಾತ್ರ
ಲಾಭದಾಯಕ ಹಾಗೂ ಗೌರವ ಧನ ಇರುವ ಹುದ್ದೆಗಳನ್ನು ಅಹಿಂದ ಸಮಾಜದವರಿಗೆ ನೀಡುತ್ತಿಲ್ಲ. ಬದಲಾಗಿ ಕೇವಲ 5-6 ಸಾವಿರ ಮತಗಳಿರುವ ಬ್ರಾಹ್ಮಣ-ಲಿಂಗಾಯತ (ಜಂಗಮ) ಸಮಾಜದವರಿಗೆ ಲಾಭದಾಯಕ ಹುದ್ದೆಯನ್ನು ನೀಡಿದ್ದಾರೆ. 75-80 ಸಾವಿರ ಮತಗಳನ್ನು ಹೊಂದಿರುವ ಅಹಿಂದ ವರ್ಗದವರಿಗೆ ಲಾಭದಾಯಕ ಮತ್ತು ಗೌರವ ಧನ ಇರುವ ಹುದ್ದೆಗಳನ್ನು ನೀಡಿದಲ್ಲಿ ಅವರು ಆರ್ಥಿಕವಾಗಿ ಸಬಲರಾಗಿ ಮುಂದೊಂದು ದಿನ ದೊಡ್ಡ ಹುದ್ದೆ ಕೇಳುತ್ತಾರೆಂಬ ಮನೋಭಾವ ರಾಯರೆಡ್ಡಿಯವರದ್ದಾಗಿದೆ. ಅದೇ ಕಾರಣಕ್ಕೆ ಕ್ಷೇತ್ರದಲ್ಲಿ ಅತೀ ಹೆಚ್ಚು ಮತಗಳನ್ನು ಹೊಂದಿರುವ ನಾಯಕರನ್ನು ಮೂಲೆಗುಂಪು ಮಾಡುವ ರಾಯರೆಡ್ಡಿಯವರ ಹುನ್ನಾರು ಹೊಸದೇನಲ್ಲ.
ಮೂಲೆ ಗುಂಪಾದ ನಾಯಕರು..?
ಬಸವರಾಜ ರಾಯರೆಡ್ಡಿ ಕಳೆದ 2023 ರ ವಿಧಾನ ಸಭಾ ಚುನಾವಣೆಯಲ್ಲಿ ಈ ಶಾಸಕರಾಗಲು ಪ್ರಮುಖ ಪಾತ್ರ ವಹಿಸಿದ ಜಿಪಂ ಮಾಜಿ ಸದಸ್ಯ ಈರಪ್ಪ ಕುಡಗುಂಟಿ, ಕುರುಬ ಸಮಾಜದ ವೀರನಗೌಡ ಬಳೂಟಗಿ, ಅವರ ಪುತ್ರ ಅಂದಾನಗೌಡ ಬಳೂಟಗಿ, ಹಾಗೂ ಬೇವೂರಿನ ಗಾಣಿಗ ಸಮಾಜದ ದಿ. ಭೀಮಶೆಪ್ಪ ಹಳ್ಳಿ ಕುಟುಂಬದವರು ಸೇರಿದಂತೆ ಇನ್ನೂ ಕೆಲವರಿಗೆ ಯಾವುದೇ ಹುದ್ದೆ ಅಥವಾ ಸ್ಥಾನಮಾನಗಳನ್ನು ನೀಡದೇ ಮೂಲೆ ಗುಂಪು ಮಾಡಿದ್ದಾರೆ ಎಂದು ಹೇಳಿದರು ತಪ್ಪಾಗಲ್ಲ.
