ಕೊಪ್ಪಳ: ನಾಳೆ ಸಂಜೆ ಬೆಂಗಳೂರಿನ ಗ್ಲಾಸ್ ಹೌಸ್ ನಲ್ಲಿ ನಡೆಯಲಿರುವ ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ 12 ಜನ ಸಚಿವರ ಪ್ರಮಾಣ ವಚನ ಅದ್ದೂರಿಯಾಗಿ ನಡೆಯಲಿದ್ದು, ಜಿಲ್ಲೆಯ ಕನಕಗಿರಿ ಕ್ಷೇತ್ರದ ನಿರ್ಗಮಿತ ಸಚಿವ ಶಿವರಾಜ ತಂಗಡಗಿ ಹೆಸರು ಮುಂಚೂಣಿಯಲ್ಲಿದೆ.
ಇತ್ತ ಸಚಿವ ಸ್ಥಾನದ ಕನಸನೊತ್ತ ಮಾಜಿ ಸಚಿವ ಹಾಗೂ ಯಲಬುರ್ಗಾ ಕ್ಷೇತ್ರದ ಶಾಸಕ ಬಸವರಾಜ ರಾಯರೆಡ್ಡಿಗೆ ನಿರಾಶೆಯಾಗಿದೆ. ಅಲ್ಲದೇ ಜಿಲ್ಲೆಯಲ್ಲಿ ಸೋಲಿಲ್ಲದ ಸರ್ದಾರ್ ಕೊಪ್ಪಳ ಕ್ಷೇತ್ರದ ಹ್ಯಾಟ್ರಿಕ್ ಗೆಲುವು ಸಾಧಿಸಿದ ಕೆ.ರಾಘವೇಂದ್ರ ಹಿಟ್ನಾಳ ಸಹ ತೀವ್ರ ಪೈಪೋಟಿ ನಡೆಸಿದ್ದಾರೆ. ಆದರೂ ಸಹ ಹೈ ಕಮಾಂಡ್ ನಿರ್ಧಾರಕ್ಕೆ ತಲೆ ಭಾಗಿ ಸಚಿವ ಸಂಪುಟ ರಚಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.
ನೂತನ ಸಚಿವ ಸಂಪುಟದ ಈ 12 ಸಚಿವರ ಆಯ್ಕೆ ಪ್ರಕ್ರಿಯೆಯು ಏಕಪಕ್ಷೀಯ ನಿರ್ಧಾರವಾಗಿರದೆ, ಅನೇಕ ರಾಜಕೀಯ ಲೆಕ್ಕಾಚಾರಗಳೊಂದಿಗೆ ನಡೆದಿದೆ ಎನ್ನಲಾಗಿದ್ದು, ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ, ಕಾಂಗ್ರೆಸ್ ವರಿಷ್ಟರ ಸ್ಪಷ್ಟ ಮಾರ್ಗದರ್ಶನ ಹಾಗೂ ಅಭಿಪ್ರಾಯಗಳನ್ನು ಕ್ರೋಡೀಕರಿಸಿ ಈ ಪಟ್ಟಿಗೆ ಅಂತಿಮ ರೂಪ ನೀಡಲಾಗಿದೆ ಎಂದು ತಿಳಿದುಬಂದಿದೆ.
ರಾಯರೆಡ್ಡಿ ಕನಸು ಛಿದ್ರ.?
ಕಳೆದ 2023 ರ ವಿಧಾನ ಸಭೆಯ ಚುನಾವಣಾ ಪ್ರಚಾರ ಸಮಯದಲ್ಲಿ ಮುಂದಿನ ಮುಖ್ಯಮಂತ್ರಿ ಸಿದ್ದರಾಮಣ್ಣ ನಾನು ಹಣಕಾಸು ಮಂತ್ರಿಯಾಗುತ್ತೇನೆ. ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿ ಪಡೆಸುತ್ತೇನೆಂದು ಪ್ರತಿ ಸಭೆಯಲ್ಲಿಯೂ ಭಾಷಣ ಮಾಡಿದ್ದ ರಾಯರೆಡ್ಡಿಯವರ ಕನಸು ಛಿದ್ರವಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಹೈಕಮಾಂಡ್ ಅಂಗಳದಲ್ಲಿನ ಚಂಡು ಸದ್ಯ ರಾಜ ಭವನ ತಲುಪಿದ್ದು, ನಾಳೆ ಸಂಜೆ ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ 12 ಜನ ಸಚಿವರ ಪ್ರಮಾಣ ವಚನ ನಡೆಯಲಿದೆ.
