ಬೆಂಗಳೂರು ಆರೋಗ್ಯಕರ ಜೀವನಶೈಲಿಗೆ ಆಯುರ್ವೇದದ ಮಹತ್ವ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ದಿಸೆಯಲ್ಲಿ ವಿಸ್ಟಾರ್ ವೆಲ್ನೆಸ್ ಸಂಸ್ಥೆಯ ಕಾರ್ಯಕ್ಕೆ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಂಸ್ಥೆಯ ಟಾಪ್ ಲೀಡರ್ ಮಾಹಿ ಅವರ ನೇತೃತ್ವದಲ್ಲಿ ನಗರದ ಖಾಸಗಿ ಹೋಟೆಲ್ನಲ್ಲಿ ಇಂದು ಆಯೋಜಿಸಲಾದ ಆಯುರ್ವೇದ ಜನಜಾಗೃತಿ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಭಾಗವಹಿಸಿ, ಆರೋಗ್ಯ ಮತ್ತು ಆಧ್ಯಾತ್ಮದ ಮಹತ್ವವನ್ನು ಒತ್ತಿ ಹೇಳಿದರು.
ಪರಮ ಪೂಜ್ಯ ಶ್ರೀ ನರಸಿಂಹ ಸ್ವಾಮಿ ಮಹಾ ಸ್ವಾಮೀಜಿಗಳು ಮಾತನಾಡಿ,
“ಇಂದಿನ ಯುಗದಲ್ಲಿ ಮಾನವನು ಆರೋಗ್ಯ ಮತ್ತು ಆರ್ಥಿಕ ಒತ್ತಡಗಳ ನಡುವೆ ಬದುಕುತ್ತಿದ್ದಾನೆ. ಈ ಸಂದರ್ಭದಲ್ಲಿ ಗಿಡಮೂಲಿಕೆ ಆಧಾರಿತ ಆಯುರ್ವೇದ ಉತ್ಪನ್ನಗಳು ದೇಹಕ್ಕೆ ಸಹಜ ಶಕ್ತಿ ನೀಡುತ್ತವೆ.
ವಿಸ್ಟಾರ್ ವೆಲ್ನೆಸ್ ಸಂಸ್ಥೆ ಈ ದಿಕ್ಕಿನಲ್ಲಿ ಉತ್ತಮ ಪ್ರಯತ್ನ ಮಾಡುತ್ತಿದೆ. ದೇಶದ ಮೂಲೆಮೂಲೆಗಳಿಗೆ ಆರೋಗ್ಯಕರ ಉತ್ಪನ್ನಗಳನ್ನು ತಲುಪಿಸುವ ಕಾರ್ಯ ಶ್ಲಾಘನೀಯವಾಗಿದೆ.
ಆಧ್ಯಾತ್ಮ ಮತ್ತು ಆರೋಗ್ಯ ಜೊತೆಗೆ ಆರ್ಥಿಕ ಸ್ಥಿರತೆ ಕೂಡ ಮುಖ್ಯ. ಈ ರೀತಿಯ ಸಂಸ್ಥೆಗಳು ಸಮಾಜದ ಸಮತೋಲನಕ್ಕೆ ಸಹಕಾರಿಯಾಗುತ್ತವೆ” ಎಂದು ಅಭಿಪ್ರಾಯಪಟ್ಟರು.
ಶ್ರೀ ಶ್ರೀನಿವಾಸ್ ಗುರೂಜೀಗಳು ಮಾತನಾಡಿ,
“ಮಾನವನ ಜೀವನದಲ್ಲಿ ಆರೋಗ್ಯವೇ ಅತಿ ದೊಡ್ಡ ಸಂಪತ್ತು. ನೈಸರ್ಗಿಕ ಪದಾರ್ಥಗಳಿಂದ ತಯಾರಾದ ಆಯುರ್ವೇದ ಉತ್ಪನ್ನಗಳು ದೇಹ ಮತ್ತು ಮನಸ್ಸಿಗೆ ಶುದ್ಧತೆ ನೀಡುತ್ತವೆ.
ವಿಸ್ಟಾರ್ ವೆಲ್ನೆಸ್ ಸಂಸ್ಥೆ ಸಾವಿರಾರು ಜನರಿಗೆ ಆರೋಗ್ಯ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ.
‘ಜನರಿಗೆ ಒಳ್ಳೆಯದನ್ನು ತಲುಪಿಸುವುದು ಸೇವೆಯ ಶ್ರೇಷ್ಠ ರೂಪ’ — ಈ ತತ್ವವನ್ನು ಅನುಸರಿಸುತ್ತಿರುವ ಈ ಸಂಸ್ಥೆಯ ಕಾರ್ಯ ಇನ್ನಷ್ಟು ವಿಸ್ತರಿಸಲಿ” ಎಂದು ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಡೈಮಂಡ್ ಡೈರೆಕ್ಟರ್ ಕನ್ಯಾಕುಮಾರಿ ಮಾತನಾಡಿ,
“ನಾವು ಬಳಸುವ ಉತ್ಪನ್ನಗಳನ್ನು ಜನರಿಗೂ ತಲುಪಿಸಿ, ಆರೋಗ್ಯಕರ ಸಮಾಜ ನಿರ್ಮಾಣ ಮಾಡುವುದೇ ನಮ್ಮ ಉದ್ದೇಶ”
ಒಟ್ಟಿನಲ್ಲಿ, ಆಧ್ಯಾತ್ಮ, ಆರೋಗ್ಯ ಮತ್ತು ಆಯುರ್ವೇದದ ಮಹತ್ವವನ್ನು ಜನರಿಗೆ ತಲುಪಿಸುವಲ್ಲಿ ಸಾವಿರಾರು ಜನರು ಕೆಲಸ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರಾದ ಈಶ್ವರ, ದಯಾನಂದ, ಶೈಲಾ, ಸುನಿಲಾ, ಗೋವಿಂದ್ ರಾಜು, ಚಂದ್ರಶೇಖರ ಹಾಗೂ ರಾಜ್ಯ ಪ್ರಶಸ್ತಿ ವಿಜೇತ ಆನಂದ್ ಸಿ ತಿರುಮಲ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.
