ಸಿಂಧನೂರು 2026 ಮೇ.25ರಂದು ನಡೆದ ಅರಳು ಮಲ್ಲಿಗೆ ಸಾಹಿತ್ಯ ವೇದಿಕೆ ರಾಜ್ಯ ಘಟಕ ಹೂವಿನ ಹಡಗಲಿಯವರು ಗೂಗಲ್ ಮೀಟ್ ನಲ್ಲಿ ಆಯೋಜನೆ ಮಾಡಿದ "ಮಾತೃ ಕಾವ್ಯಧಾರೆ" ಎನ್ನುವ ಶೀರ್ಷಿಕೆ ಅಡಿಯಲ್ಲಿ ಸ್ವರಚಿತ ಕವನ ವಾಚನದಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನಗಳನ್ನು ಆಯ್ಕೆ ಮಾಡಲಾಗಿದೆ.
ಸಿಂಧನೂರಿನ ಪಂಪಯ್ಯಸ್ವಾಮಿ ಸಾಲಿಮಠ ಅಂತರಗಂಗಿ ತನ್ನ ತಾಯಿ ಬಸಮ್ಮಸಾಲಿಮಠ ಇವರ ಕುರಿತಾಗಿ 'ನಮ್ಮವ್ವ' ಎನ್ನುವ ಕವನವನ್ನು ರಚನೆ ಮಾಡಿ ವಾಚನ ಮಾಡಿದ್ದಾರೆ. ಆಯ್ಕೆ ಸಮಿತಿ ಕವನಕ್ಕೆ ತೃತೀಯ ಸ್ಥಾನವನ್ನು ನೀಡಿದೆ. ಈ ಕವನ ಅಂತರ ರಾಷ್ಟ್ರಮಟ್ಟ, ರಾಜ್ಯಮಟ್ಟದಲ್ಲಿ ಮೂರುಬಾರಿ ಪ್ರಶಸ್ತಿಗೆ ಆಯ್ಕೆಯಾಗಿದೆ ಎಂದು ಕವಿ ಪಂಪಯ್ಯಸ್ವಾಮಿ ಸಾಲಿಮಠ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಆಯ್ಕೆ ಮಾಡಿದ ಅಧ್ಯಕ್ಷರಿಗೂ, ಆಯ್ಕೆ ಸಮಿತಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.
