ಕುಕನೂರ: ತಾಲೂಕಿನ ಮಂಡಲಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಭಟಪ್ಪನಹಳ್ಳಿ ಗ್ರಾಮದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿ ಸ್ಥಳದಲ್ಲಿ ರೋಜಗಾರ ದಿನ ಆಚರಿಸಲಾಯಿತು.
ಕಾಮಗಾರಿ ಸ್ಥಳದಲ್ಲಿ ಪಂಚಾಯತ ಅಭಿವೃದ್ಧಿ ಅಧಿಕಾರಿ ಸುರೇಶ್ ಕಾವಳೆ ಮಾತನಾಡಿ ನರೇಗಾ ಯೋಜನೆಯ ಕಾಮಾರಿಗಳಲ್ಲಿ ಹಾಜರಾತಿ ಯಶಸ್ವಿಯಾಗಲು ಇ ಕೆವೈಸಿ ಅವಶ್ಯ ಅದಕ್ಕಾಗಿ ಎಲ್ಲರೂ ಇ ಕೆವೈಸಿ ಮಾಡಬೇಕು, ಅಳತೆ ಪ್ರಕಾರ ಕೆಲಸ ನಿರ್ವಹಿಸಬೇಕು ಎಂದರು, ನಂತರ ತಾಲೂಕ ಐ.ಇ.ಸಿ ಸಂಯೋಜಕ ಲಕ್ಷ್ಮಣ ಕೆರಳ್ಳಿ ಮಾತನಾಡಿ ಕೂಲಿಕಾರರು ತಮ್ಮ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು ಬಿಸಿಲು ಬಹಳಷ್ಟು ಇರುವುದರಿಂದ ಬೆಳಗ್ಗೆ ಬೇಗನೇ ಕೆಲಸಕ್ಕೆ ಬರಬೇಕು, ತಲೆಗೆ ಟೋಪಿ ಅಥವಾ ವಸ್ತ್ರಗಳನ್ನು ಹಾಕಿರಬೇಕು, ಕೂಲಿಕಾರರು ತಮ್ಮ ಕುಟುಂಬದ ಸುರಕ್ಷತೆಗಾಗಿ ತಾವು ಪ್ರತಿಯೋಬ್ಬರು PMSBY, PMJJBY ಜೀವ ವಿಮೆ ಮಾಡಿಸಿಕೊಳ್ಳಬೇಕು, ಅವಶ್ಯಕತೆ ಇರುವವರು ಅಟಲ್ ಪೆನ್ಸೆನ್, PMSYMDY ಪ್ರಧಾನಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆ ಪೆನ್ಸೆನ್ ಸ್ಕೀಮ್ ಗಳಲ್ಲಿ ನೊಂದಣಿ ಮಾಡಿಕೊಳ್ಳಬೇಕು ಎಂದರು.
ಕೂಲಿಕಾರರು ಕನಿಷ್ಟ ಅಳತೆಯ ಕೆಲಸ ನಿರ್ವಹಿಸಿದರೆ ರೂ. 370 ಸಿಗಲಿದ್ದು ನರೇಗಾ ಯೋಜನೆಯಡಿ ಕೂಲಿಕಾರರು ಕೆಲಸ ಮಾಡಬೇಕು, ಕೂಲಿ ಹಣ ನೇರವಾಗಿ PFMS ಮೂಲಕ ಅವರ ಖಾತೆಗೆ ಜಮೆ ಆಗುವುದರಿಂದ ಕೂಲಿಕಾರರು ತಮ್ಮ ಖಾತೆಯನ್ನು ಸಕ್ರೀಯ ವಾಗಿ ಇಡುವುದು NPCI ಲಿಂಕ್ ಮಾಡಬೇಕು, E-KYC ಮಾಡಿರಬೇಕು ಎಂದರು.
ಸ್ಥಳದಲ್ಲಿ ಗ್ರಾಮ ಪಂಚಾಯತಿ ಕಂಪ್ಯೂಟರ್ ಅಪರೇಟರ್ ಸಂತೋಷ ಬಂಡಾರಿ, ಕಾಯಕ ಬಂಧುಗಳು, ಭಟಪ್ಪನ ಹಳ್ಳಿ ಕೂಲಿಕಾರರು ಹಾಜರಿದ್ದರು.
