ಗಂಗಾವತಿ ಮನುಷ್ಯನ ಜಾತಿ ಮತ ಪಂಥ ಭೇದ ಎಣಿಸದೆ ಸರ್ವ ಜನಾಂಗಕ್ಕೂ ಆರೋಗ್ಯ ಸೇವೆ ಮಾಡುವುದು ಮಾನವೀಯ ಅತ್ಯಂತ ಉನ್ನತ ಸೇವೆ ಎಂದು ಮಾಜಿ ಎಂಎಲ್ಸಿ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹೆಚ್ ಆರ್ ಶ್ರೀನಾಥ್ ಹೇಳಿದರು ಅವರು ನಗರದ ಶ್ರೀ ಸೀತಾರಾಮ ಆಂಜನೇಯ ದೇವಸ್ಥಾನದ ಆವರಣದಲ್ಲಿ ಡಾಕ್ಟರ್ ಆರ್ ಬಿ ಪಾಟೀಲ್ ಫೌಂಡೇಶನ್ ಹಾಗೂ ಶ್ರೀ ಅಂಜನಾದ್ರಿ ಗೆಜ್ಜೆ ಹೆಜ್ಜೆ ಜನಸೇವಾ ಕಲಾ ಟ್ರಸ್ಟ್ ಏರ್ಪಡಿಸಿರುವ ಎರಡು ದಿನಗಳ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು,
ಜಾಗೃತಿಯ ಕೊರತೆಯಿಂದ ಅನೇಕ ರೋಗಗಳು ಜನರಲ್ಲಿ ಉಲ್ಬಣಗೊಳ್ಳುತ್ತಿದ್ದು ಇಂಥ ಶಿಬಿರಗಳು ಆರ್ಥಿಕ ವೆಚ್ಚ ತಗ್ಗಿಸುವ ಜೊತೆಗೆ ಆರೋಗ್ಯ ಕ್ರಮಗಳಿಗೆ ಸಹಕಾರಿ ಆಗುತ್ತದೆ ಸರ್ಕಾರ ಗಳ ಸೌಲಭ್ಯ ಪಡೆಯಲು ನೆರವಾಗುತ್ತದೆ ಎಂದರು ವೇದಿಕೆ ದಿವ್ಯ ಸಾನಿಧ್ಯ ವಹಿಸಿದ್ದ ಸುಳೆಕಲ್ ಬೃಹನ್ ಮಠದ ಪರಮಪೂಜ್ಯ ಶ್ರೀ ಭುವನೇಶ್ವರ ತಾತನವರು ಮಾತನಾಡಿ, ದಿವ್ಯ ಸಾನಿಧ್ಯ ವಹಿಸಿದ್ದ ಹಜರತ್ ಸೈಯ್ಯದ್ ಷಾ ನೂರುಲ್ಲಾ ನಬೀರಾ ಖಾದ್ರಿ ಗಂಗಾವತಿ ಇವರು ಮಾತನಾಡಿ ಹಿಂದು ಮುಸ್ಲಿಂ ಸಿಕ್ ಸಾಯಿ ಎಲ್ಲ ಧರ್ಮಗಳಿಗೂ ಒಂದೇ ಮಾನವ ಗುಣ ಇದ್ದು ಅದನ್ನು ಗುರುತಿಸುವ ನಮ್ಮೆಲ್ಲರದ್ದು ಮನುಷ್ಯತ್ವ ಸರ್ವರು ಬದುಕುವ ಗುಣ ಎಲ್ಲರೂ ಬೆಳೆಸಿಕೊಳ್ಳಬೇಕಿದೆ ಎಂದು ಕಿವಿಮಾತು ಹೇಳಿದರು ಆರೋಗ್ಯ ಸೇವೆ ಮಾನವ ಕುಲಕ್ಕೆ ಜಯವಾಗಲಿ ಎನ್ನುವ ವಾಣಿಯನ್ನು ಎತ್ತಿ ಹಿಡಿದಂತೆ ಸಾಮೂಹಿಕ ಆರೋಗ್ಯ ಸೇವೆ ಬಡವರ ಆರ್ಥಿಕ ಅವರೆಯನ್ನು ತಗ್ಗಿಸುವದಲ್ಲದೆ ಆತ್ಮವಿಶ್ವಾಸವನ್ನು ವೃದ್ಧಿಸಿದಂತಾಗುತ್ತದೆ ಎಂದು ಹೇಳಿದರು.
ಡಾಕ್ಟರ್ ಆರ್ ಬಿ ಪಾಟೀಲ್ ಫೌಂಡೇಶನ್ ಅಧ್ಯಕ್ಷರು ಶಿಬಿರದ ರೂವಾರಿಗಳಾದ ಆರ್ ಬಿ ಪಾಟೀಲ್ ವಕೀಲರು ಮಾತನಾಡಿ ಗಂಗಾವತಿ ವಿಧಾನಸಭಾ ಕ್ಷೇತ್ರದ ಜನತೆ ಸದೃಢ ಆರೋಗ್ಯ ಹೊಂದಬೇಕು ಅಂತ ಹಂತವಾಗಿ ಎಲ್ಲಾ ಹೋಬಳಿ ಕೇಂದ್ರಗಳಲ್ಲೂ ಉಚಿತ ತಪಾಸಣಾ ಶಿಬಿರಗಳ ಮೂಲಕ ಆರೋಗ್ಯ ವೃದ್ಧಿಗೆ ಶ್ರಮಿಸುವೆ ಎಂದು ವಿವರಿಸಿದರು ಕ್ಯಾನ್ಸರ್ ಹೃದಯ ಕಾಯಿಲೆ ಇತರ ಗಂಭೀರ ಕಾಯಿಲೆಗಳು ತಪಾಸಣೆ ಕೋರತೆಯಿಂದ ಜೀವ ಬಳಿ ಪಡೆಯುತ್ತಿದ್ದು ಇಂತಹ ಘಟನೆಗಳು ನಡೆಯದಂತೆ ಜಾಗೃತಿಗೊಳಿಸುವುದಕ್ಕಾಗಿ ಶಿಬಿರಾಯೋಜಿಸಿರುವುದಾಗಿ ಶ್ರೀ ಅಂಜನಾದ್ರಿ ಗೆಜ್ಜೆ ಹೆಜ್ಜೆ ಜನಸೇವೆ ಕಲಾ ಟ್ರಸ್ಟ್ ಅಧ್ಯಕ್ಷ ನಾಗರಾಜ್ ಇಂಗಳಗಿ ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ಅರಳಹಳ್ಳಿ ಬೃಹನ್ ಮಠದ ಶ್ರೀ ರೇವಣಸಿದ್ದಯ್ಯ ತಾತನವರು ದಿವ್ಯ ಸಾನಿಧ್ಯ ವಹಿಸಿದ್ದರು ವೇದಿಕೆಯಲ್ಲಿ ಶ್ರೀ ಭಗೀರಥ ಉಪ್ಪಾರ ಸಮಾಜದ ಗಂಗಾವತಿ ತಾಲೂಕ ಅಧ್ಯಕ್ಷರಾದ ವೆಂಕಟೇಶ್ ಅಮರ ಜ್ಯೋತಿ, ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷರಾದ ಶಿವಕುಮಾರ್ ಗೌಡ ವಿಐಪಿ ಮೆಲೋಡಿಸ್ ನಾಯಕರಾದ ಪಂಪಾಪತಿ ಇಂಗಳಗಿ ಇತರರಿದ್ದರು ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸುವರ್ಣ ಗಿರಿ ಪತ್ರಿಕೆ ಸಂಪಾದಕರಾದ ಎಸ್ಎಮ್ ಪಟೇಲ್ ಮುಕ್ಕಣ್ಣ ಮನಹಳ್ಳಿ ಗೋವಿಂದಪ್ಪ ಹುಲಗಿ ಇತರರನ್ನು ಸನ್ಮಾನಿಸಲಾಯಿತು.
